Posts

Showing posts from December, 2022

ಕ್ರಿವೈಸ್ ಗಾರ್ಡನಿಂಗ್

Image
  ಅದೊಂದು ಮಹಾನಗರಿ; ಕಾಂಕ್ರೀಟ್ ಕಾಲುದಾರಿ-ಡಾಂಬರು ರಸ್ತೆ; ಮಣ್ಣಿನ ಕುರುಹೂ ಇರದ ಕಲ್ಲು ಹಾದಿಯ ಸಂದಿಯಲ್ಲೊಂದು ಕಳೆ ಗಿಡ; ಚಿಕ್ಕ ಹಳದಿ ಹೂ ಬಿಟ್ಟು ಯಾರ ಕಾಲ ತುಳಿತಕ್ಕೆ ಸಾಯುವೆನೋ ಎಂದು ಎದುರು ನೋಡುತ್ತಿರುತ್ತದೆ. ಪೇಟೆಯ ಹಳೆಯ ಮಣ್ಣಿನ ಗೋಡೆಯ ಮನೆಯ ಬಿರುಕಿನಲ್ಲಿ ಅಶ್ವತ್ಥಗಿಡವೊಂದು ಎರಡೆಲೆ ಬಿಟ್ಟು ಇಣುಕುತ್ತಿರುತ್ತದೆ. ಇವುಗಳನ್ನು ನೆಟ್ಟವರಾರೋ, ನೀರೆರದವರಾರೋ, ಸಾಕಿ ಸಲಹುವರಾರೋ! ಯಾರ ಹಂಗಿಲ್ಲದೆ ಬೆಳೆಯುತ್ತಾ ಸಾಗುವ ಸಂದು-ಗೊಂದಿನ ಈ ಜೀವನ ಇಂದು ‘ಕ್ರಿವೈಸ್ ಗಾರ್ಡನ್’ಎಂಬ ಸುಂದರ ಪ್ರಕಾರಕ್ಕೆ ಪ್ರೇರೇಪಣೆಯಾಗಿದೆ. ಈ ಗಾರ್ಡನಿಂಗ್ ಕಲೆಯನ್ನು ಜನಪ್ರಿಯಗೊಳಿಸಿದ್ದು ಪ್ರಸಿದ್ಧ ‘ಬೊಹೇಮಿಯಾ’ ಶೈಲಿಗೆ ತವರಾದ ‘ಜೆಕ್ ಗಣರಾಜ್ಯ’. ಯುರೋಪಿನ ಒಣ ಶೀತ ಪ್ರದೇಶದ ಎತ್ತರದ ‘ಆಲ್ಪೈನ್’ ಪರ್ವತ ಶ್ರೇಣಿಯ ಬಂಡೆಗಳಲ್ಲಿ ಬೆಳೆಯುವ ಸಸ್ಯವರ್ಗಗಳಿಂದ ಪ್ರೇರೇಪಿತವಾದ ಈ ಗಾರ್ಡನ್ ಪ್ರಕಾರ 1970ರಲ್ಲೇ ಪ್ರಚಾರದಲ್ಲಿತ್ತು. ಕಲ್ಲು-ಮಣ್ಣಲ್ಲೂ ಜೀವ ತುಂಬುವ ನಿಸರ್ಗದ ಮಾಯೆಯನ್ನು ಕೃತಕವಾಗಿ ಮರುಸೃಷ್ಟಿಸುವುದು ‘ಕ್ರಿವೈಸ್ ಗಾರ್ಡನ್’ನ ವಿಶಿಷ್ಟತೆ. ಸುಲಭವಾಗಿ ನಿರ್ಮಿಸಲು ಸಾಧ್ಯವಾದ ಈ ಪ್ರಕಾರಕ್ಕೆ ಮುಖ್ಯವಾಗಿ ಬೇಕಾಗಿರುವುದು ಚಪ್ಪಟೆ ಕಲ್ಲುಗಳು, ಮರಳು, ಜಲ್ಲಿ. ಮಣ್ಣು ಅಗೆದು, ಕಂದರ ತೋಡಿ, ವಿವಿಧ ಸ್ತರದಲ್ಲಿ ಮಣ್ಣು ದಿಬ್ಬಗಳನ್ನು ಮಾಡಿ, ಚಪ್ಪಡಿ ಕಲ್ಲನ್ನು ಮಣ್ಣಿನಲ್ಲಿ ಬಿಗಿಯಾಗಿ ಊರಿ, ಕಲ್ಲುಗಳ ನಡುವೆ ಮಣ್ಣು-ಮರಳನ್ನು ಹಿ...

ಹವಾಮಾನ ವೈಪರೀತ್ಯಕ್ಕೆ ಕಾಂತಾರದಲ್ಲಿ ಪರಿಹಾರ!

Image
‘ಕಾಂತಾರ- ಅಪರೂಪದ ಶಬ್ಧವೊಂದು ಇಂದು ಭಾಷೆ ಮೀರಿ ಬೆಳೆದಿದೆ. ಹಲವು ನಿಗೂಢವುಳ್ಳ ಅರಣ್ಯದ ಸುತ್ತ ನಡೆಯುವ ಕಥೆ ಕಾಡು-ನಾಡು ಬೆಸೆಯುವ ಧಾರ್ಮಿಕ ಕೊಂಡಿಯ ಬಗ್ಗೆ ವಿಶೇಷ ರೀತಿಯಲ್ಲಿ ನಿರೂಪಿಸುತ್ತಾ ಹಿರಿಯ ಜನರ ಆಚರಣೆ ನಾವಂದುಕೊಂಡಿರುವಷ್ಟು ಮೂಢವಲ್ಲ, ಬದಲಿಗೆ ಬಲವಾದ ಹಿನ್ನೆಲೆಯಿರುವ, ಆಳವಾದ ಅರ್ಥವಿರುವ, ವಿಜ್ಞಾನಕ್ಕೆ ನಿಲುಕದ ಸಂಗತಿ ಎಂಬುದನ್ನು ತೆರೆದಿಟ್ಟಿದೆ. ಸಿನೆಮಾ ನೋಡಿ ತಿಂಗಳಾದರೂ ಕಾಂತಾರದ ಗುಂಗು ಬಿಟ್ಟಿಲ್ಲ. ಬಹುಶಃ ಪ್ರದರ್ಶನ ಮುಗಿದ ಮೇಲೆ ಪ್ರತಿಯೊಬ್ಬರು ತಮ್ಮೂರಿನ ಸಂಪದ್ಭರಿತ ಸಂಸ್ಕೃತಿಯನ್ನು, ದೈವದ ನೆನಪನ್ನು ಮಾಡಿಕೊಂಡಿರಲು ಸಾಕು! ನನಗೂ ಅರೆಕ್ಷಣ ನಮ್ಮೂರಿನ ಮಾರಿಯಮ್ಮನ ಜಾತ್ರೆ; ಬೇಡರ ವೇಷ; ವರ್ಷಕ್ಕೊಮ್ಮೆ ಕುರಿ-ಕೋಳಿ ಕೊಟ್ಟು ತೃಪ್ತಿ ಪಡಿಸುವ ಭೂತಪ್ಪ, ಹುಲಿಯಪ್ಪ, ಚೌಡಮ್ಮ, ಬರಮ ದೇವರು, ಜಟಕಾ, ಮಾಸ್ತಿಗಳ ಪೂಜೆ; ದೇವರ ಹೆಸರಲ್ಲಿ ಕಾಪಾಡುವ ನಾಗಬನ, ದೇವರ ಕಾಡು; ಎಲ್ಲಾ ಕಣ್ಣಮುಂದೆ ಹಾದುಹೋದವು. ಜೊತೆಗೆ ಪಶು-ಪಕ್ಷಿ, ಗಿಡ-ಮರ, ನೆಲ-ಜಲ, ಬೆಟ್ಟ-ಗುಡ್ಡ, ಕಲ್ಲು-ಮಣ್ಣಿಗೂ ಪೂಜೆ ಮಾಡುವ ನಮ್ಮ ಸಂಸ್ಕೃತಿಯ ಮೂಲ ಉದ್ದೇಶಗಳು ಅಚ್ಚರಿಯನೆಸಿದವು. ಅಷ್ಟಾಗಿಯೂ ನಮ್ಮ ಪೂರ್ವಜರು ನಿಸರ್ಗ ಆರಾಧಕರಾಗಬೇಕಾದ ಅವಶ್ಯಕತೆಯೇನಿತ್ತು!? ಈ ಆಚರಣೆಗಳನ್ನು ಮುಂದಿನ ಜನಾಂಗಕ್ಕೆ ಬಳುವಳಿ ಕೊಡುವ ಅಗತ್ಯವಾದರೂ ಏನಿತ್ತು!? ಇಂದು ಉಂಟಾಗುತ್ತಿರುವ ಹವಾಮಾನ ವೈಪರಿತ್ಯ, ಪರಿಸರ ಹಾನಿ, ಪ್ರಕೃತಿ ವಿಕೋಪ, ಜೀವವೈವಿಧ್ಯತೆಯ ನಾಶದ...

ಕಾಂತಾರದ ಪರಿಸರ ಪಾಠ

Image
  ‘ ಕಾಂತಾರ - ಅಪರೂಪದ ಶಬ್ಧವೊಂದು ಇಂದು ಭಾಷೆ ಮೀರಿ ಬೆಳೆದಿದೆ . ಹಲವು ನಿಗೂಢವುಳ್ಳ ಅರಣ್ಯದ ಸುತ್ತ ನಡೆಯುವ ಕಥೆ ಕಾಡು - ನಾಡು ಬೆಸೆಯುವ ಧಾರ್ಮಿಕ ಕೊಂಡಿಯ ಬಗ್ಗೆ ವಿಶೇಷ ರೀತಿಯಲ್ಲಿ ನಿರೂಪಿಸುತ್ತಾ ಹಿರಿಯ ಜನರ ಆಚರಣೆ ನಾವಂದುಕೊಂಡಿರುವಷ್ಟು ಮೂಢವಲ್ಲ , ಬದಲಿಗೆ ಬಲವಾದ ಹಿನ್ನೆಲೆಯಿರುವ , ಆಳವಾದ ಅರ್ಥವಿರುವ , ವಿಜ್ಞಾನಕ್ಕೆ ನಿಲುಕದ ಸಂಗತಿ ಎಂಬುದನ್ನು ತೆರೆದಿಟ್ಟಿದೆ .