Posts

Showing posts from January, 2023

ತೂಗು ಗಿಡಗಳ ಜೋಗುಳ

Image
  ಗೋಡೆಗಂಟಿಸಿದ ನಲವತ್ತಿಂಚಿನ ಟಿವಿ; ಅಕ್ಕ ಪಕ್ಕ ಶೋ ಕೇಸ್; ಮುಂದೊಂದು ಸೋಫಾ; ಪತ್ರಿಕೆ-ಪುಸ್ತಕ ಜೋಡಿಸಿಟ್ಟ ಟೇಬಲ್; ಒಂದೆರಡು ಕುರ್ಚಿ; ಹರಗಣವನ್ನೆಲ್ಲಾ ಬಚ್ಚಿಡಲೊಂದು ಕಪಾಟು. ಇಂತಹ ನೀರಸ ‘ಲಿವಿಂಗ್ ರೂಮ್’ಗೆ ಜೀವ ತುಂಬುವ ಒಳಾಂಗಣ ಸಸ್ಯಗಳು ಇವತ್ತಿನ ಪೇಟೆ ಮಂದಿಯ ಹೊಸ ಗೀಳು. ಮನೆಯೊಳಕ್ಕೆ ಸಸ್ಯಸಂಪತ್ತನ್ನು ಬರಮಾಡಿಕೊಂಡು ಅವುಗಳ ಆರೈಕೆಯಲ್ಲಿ ಖುಷಿ ಕಾಣುತ್ತಿರುವ ನಗರವಾಸಿಗಳು ಇಂದು ಹಲವಾರು. ನರ್ಸರಿಗೆ ಹೋದಾಗಲೆಲ್ಲಾ ಹೊಸ ಗಿಡ ಕೊಳ್ಳುವ ಆಸೆ ಅವರದು. ಆದರೇನು! ಜಾಗದ್ದೇ ಸಮಸ್ಯೆ. ಈ ಹಿನ್ನೆಲೆಯಲ್ಲಿ ‘ಹ್ಯಾಂಗಿಂಗ್ಸ್’ಗಳ ಟ್ರೆಂಡ್ ಹಸಿರು ಮನಸ್ಸುಗಳನ್ನು ಆಕರ್ಷಿ ಸುತ್ತಿದೆ. ಮನೆಯ ಸೀಲಿಂಗ್ ಗಾರ್ಡನ್ ಆದಾಗ ಯಾವುದೇ ಇಂಜಿನಿಯರ್ ಆಗಿರಲಿ, ಮನೆ ಕಟ್ಟುವಾಗ ಮೇಲ್ಛಾವಣಿಗೆ ‘ಹುಕ್’ಗಳನ್ನು ನಿರ್ಮಿಸಿಯೇ ಇರುತ್ತಾರೆ. ಅವುಗಳನ್ನು ವಿಭಿನ್ನ ರೀತಿಯಲ್ಲಿ ಬಳಸುವ, ‘ಝೂಮರ್’ ದೀಪಗಳನ್ನು ಸಸ್ಯಗಳಿಂದ ಬದಲಿಸುವ ಸುಸಮಯವಿದು. ಮನೆಯ ಹಜಾರ, ಬಾಲ್ಕನಿಯ ಛಾವಣಿಗಿರುವ ಕೊಕ್ಕೆ-ಕೊಂಡಿಗಳಿಗೆಲ್ಲಾ ಹ್ಯಾಂಗಿಂಗ್ ಪ್ಲಾಂಟ್ ಗಳನ್ನು ಸಿಕ್ಕಿಸಿ, ಇಳಿಯುವ ತರುಲತೆಗಳ ಸೌಂದರ್ಯವನ್ನು ಅನುಭವಿಸುವ ಸಂದರ್ಭವಿದು. ಕ್ರಿಯಾಶೀಲತೆಯ ಅನುಸಾರವಾಗಿ ಕರ್ಟನ್ ರಾಡ್ ಗಳು, ಬಟ್ಟೆಯ ನ್ಯಾಲೆಗಳು ಕೂಡಾ ಹ್ಯಾಂಗಿಂಗ್ ಪಾಟ್ ಗಳ ನೆಚ್ಚಿನ ನೆಲೆಯಾಗಬಹುದು. ಹುಕ್ ಗಳಿಲ್ಲದಿದ್ದರೂ ಪರವಾಗಿಲ್ಲ, ಗೋಡೆಯಿಂದ ಮುಂದೆ ಚಾಚಿದ ಕಬ್ಬಿಣದ ಸ್ಟಾಂಡ್ ಗಳ ಮೂಲಕ ಹ್ಯಾಂಗಿಂಗ್...

ಜಗದ ತಟ್ಟೆಗೆ ಸಿರಿಧಾನ್ಯ ಬಡಿಸಿದ ಭಾರತ - 2023- International Year of Millets

Image
ನಮ್ಮ ಭೂಮಂಡಲದಲ್ಲಿ ಇದುವರೆಗೆ ದಾಖಲಾಗಿರುವುದು ನಾಲ್ಕು ಲಕ್ಷ ಜಾತಿಯ ಸಸ್ಯ ಸಂಪತ್ತು; ಇವುಗಳಲ್ಲಿ ಐವತ್ತು ಸಾವಿರ ಸೇವನೆಗೆ ಯೋಗ್ಯವಾದವು. ಆದರೆ ನಮ್ಮ ಆಹಾರ,  ಗಿರಕಿ ಹೊಡೆಯುತ್ತಿರುವುದು ಅಕ್ಕಿ, ಗೋಧಿ, ಮೆಕ್ಕೆಜೋಳದ ಮಧ್ಯೆ. ಹೆಚ್ಚು ಸಂಶೋಧನೆ ನಡೆಯುತ್ತಿರುವುದು ಇವೇ ಮೂರು ಬೆಳೆಗಳ ಮೇಲೆ. ‘ಕೆಲವೇ ಬೆಳೆ’ಗಳಿಗೆ ಕೇಂದ್ರಿತವಾದ ಪಥ್ಯ ಪದ್ಧತಿ ಆಹಾರ ಭದ್ರತೆಯನ್ನು ದುರ್ಬಲವಾಗಿಸುತ್ತಿದೆ ಎಂಬ ಅಭಿಪ್ರಾಯ ಜಾಗತಿಕವಾಗಿ ವ್ಯಕ್ತವಾಗುತ್ತಿದೆ. ಜೊತೆಗೆ ಹವಾಮಾನ ವೈಪರಿತ್ಯಕ್ಕೆ ನಲುಗಿ ಇವುಗಳ ಕುಸಿಯುತ್ತಿರುವ ಇಳುವರಿ ತಜ್ಞರ ನಿದ್ದೆಗೆಡಿಸಿದೆ.  ‘ವಾವಿಲೋವ್’ನ ವಾದಗಳು ಭತ್ತ ಹುಟ್ಟಿದ್ದು ಭಾರತದಲ್ಲಾದರೂ ನಾವು ಪ್ರೀತಿಯಿಂದ ಸೇವಿಸುತ್ತಿರುವ ಗೋಧಿ ಹುಟ್ಟಿದ್ದು ಮಧ್ಯಪ್ರಾಚ್ಯದಲ್ಲಿ, ಮೆಕ್ಕೆಜೋಳ ಹುಟ್ಟಿದ್ದು ಮೆಕ್ಸಿಕೋದಲ್ಲಿ. ಹೀಗೆ ಪ್ರತಿ ಬೆಳೆಗೂಂದು ತವರಿದೆ; ಆ ತವರಿನಲ್ಲಿ ಬಳಗವಿದೆ; ಕೆಲ ಸದಸ್ಯರಷ್ಟೇ ತಮ್ಮದಲ್ಲದ ದೂರದ ಊರಿನಲ್ಲಿ ನೆಲೆಯೂರಿವೆ ಎಂದಿದ್ದು ರಷ್ಯನ್  ವಿಜ್ಞಾನಿ ವಾವಿಲೋವ್ (1887-1943). ಬೆಳೆಗಳು ಹುಟ್ಟಿ ಬೆಳೆದ ತವರೂರಿನಲ್ಲಿ ಜೈವಿಕ ವೈವಿಧ್ಯತೆ ಅಗಾಧವಾಗಿರುತ್ತದೆ; ಸಸ್ಯವೊಂದರ ಉಳಿವೆಗೆ ಬೇಕಾಗುವ ಅನುವಂಶಿಕ ಧಾತುಗಳ ಶಕ್ತಿ, ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕತೆ ವೈವಿಧ್ಯತೆಯಲ್ಲಡಗಿದೆ; ಸಂಕರಣದಂತ ತಳಿ ಅಭಿವೃದ್ಧಿಗೆ ವೈವಿಧ್ಯತೆ ವರ; ದುರಾದೃಷ್ಟವೆಂದರೆ ಈ ದೇಸೀ ವೈವಿಧ್ಯತೆ ಭವಿಷ್ಯದಲ್ಲಿ ...